Shri Adi Shankara's Prashnottara Ratna Malika (Kannada)

 

Adi Shankara

ಪೂಜ್ಯರೇ ಯಾವುದನ್ನು ಪಡೆಯಬೇಕು ?

>ಗುರು ಹಿರಿಯರ ಮಾತನ್ನು ಮಾರ್ಗದರ್ಶನವನ್ನು  ಪಡೆಯಬೇಕು .


ಹಿತಕರವಾದದ್ದು
ಯಾವುದು ?

>ಧರ್ಮವು (ಕರ್ತವ್ಯವು ) ಹಿತಕರವಾದದ್ದು.


ವಿಷವು
ಯಾವುದು ?

>ಗುರು-ಹಿರಿಯರಿಗೆ ಮಾಡಿದ ಅವಮಾನ,ಅಗೌರವವೇ ವಿಷವು 


  
ಮನುಷ್ಯನಲ್ಲಿ ಹೆಚ್ಚಾಗಿ ಅಪೇಕ್ಷಿಸುವುದು ಯಾವುದು ?

>ತನ್ನ ಮತ್ತು ಇತರರ ಒಳ್ಳೆಯದರಲ್ಲಿ ತೊಡಗಿಸಿದ ಜೀವನವು ಮಾನವನಲ್ಲಿ 

ಹೆಚ್ಚು ಅಪೇಕ್ಷಿತ .


ಮತ್ತೆ
ಕಳ್ಳರು ಯಾರು ?

>ಸುಖಪಭೋಗ ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ ಮನಸನ್ನು 

ಅಪಹರಿಸುತ್ತವೆ 


ವ್ಯೆರಿಯು
ಯಾರು ?

>ನಿರುದ್ಯೋಗವೇ (ಕೆಲಸವಿಲ್ಲದಿರುವುದೇ) ವ್ಯೆರಿಯು .

  

ಘನತೆಯ ಮೂಲವು ಯಾವುದು ?

>ಬೇಡದೇ ಇರುವುದೆಂಬುದೇ ಘನತೆಯ ಮೂಲವು (ಇತರರನ್ನು ಯಾವುದನ್ನೂ ಬೇಡುವುದು )


ಯಾವುದಕ್ಕೆ
ದುಃಖ ವೆನ್ನಬೇಕು ?

>ಸಂತೋಷ ವಿಲ್ಲದಿರುವುದೇ  ದುಖವು 


 
ಆಲಸ್ಯತನವು ಯಾವುದು ?

>ನಿಪುಣನಾದವನು (ವಿದ್ವಾಂಸ ನಾದವನು )ಅಧ್ಯಯನ ಮಾಡದಿರುವುದು ಆಲಸ್ಯ 


 
ಕಮಲದ ಎಲೆಯ ಮೇಲಿನ ನೀರಿನಂತೆ ಚಂಚಲವಾದದ್ದು ಯಾವುದು ?

>ತಾರುಣ್ಯ,ಸಂಪತ್ತು ಮತ್ತು ಆಯುಷ್ಯ ಇವು ಕಮಲದ ಎಲೆ ಮೇಲಿನ ನೀರಿನಂತೆ ಚಂಚಲವಾದದ್ದು (ಅನಿಷ್ಟಿತ ವಾದದ್ದು )


 
ಬೆಲೆ ಕಟ್ಟಲಾಗದ್ದು ಯಾವುದು ?

>  ಸರಿಯಾದ ಸಂದರ್ಭ ಕೊಟ್ಟಿದ್ದು 


 
ಸಾಯುವವರೆಗೂ ಬಾಣದಂತೆ ಚುಚ್ಚುತ್ತಲೇ ಇರುವುದು ಯಾವುದು ?

>ಬಚ್ಚ್ಚಿಟ್ಟು ಕೊಂಡ ಪಾಪಕಾರ್ಯವು ಸಾಯುವವರೆಗೂ ಬಾಣದಂತೆ ಚುಚ್ಚತ್ತಲೇ ಇರುತ್ತದೆ .

 

 ಯಾವ ವಿಷಯದಲ್ಲಿ ಪ್ರಯತ್ನವನ್ನು  ಮಾಡಬೇಕು ?

>ವಿಧ್ಯಾಭ್ಯಾಸದಲ್ಲಿ ,ಒಳ್ಳೆಯ ಔಷದೊಪಚಾರದಲ್ಲಿ ಮತ್ತು ದಾನ ಮಾಡುವಲ್ಲಿ ಪ್ರಯತ್ನ ಮಾಡಬೇಕು 

 

ಜಗತ್ತನ್ನು ಯಾರು ಗೆಲ್ಲುತ್ತಾರೆ ?(ವಿಶ್ವದಲ್ಲಿ ಯಶಸ್ಸನ್ನು ಹೊಂದುವವರು ಯಾರು)

> ಸತ್ಯ ಮತ್ತು ಸಹನೆ ಗಳಿಂದ ಕೂಡಿದ ಮನುಷ್ಯನು ಜಗತ್ತನ್ನು ಗೆಲ್ಲುತ್ತಾನೆ 

 

ಪ್ರಾಣಿ ಸಮೂಹವು ಯಾರ ಅಧೀನದಲ್ಲಿರುತ್ತದೆ ?

>ಪ್ರಾಣಿ ಸಮೂಹವು ಸತ್ಯವದುದನ್ನು ಮತ್ತು ಪ್ರಿಯವಾದುದನ್ನು ಮಾತನಾಡುವ ವಿನಯಶಾಲಿಯ ವಶದಲ್ಲಿ ಇರುತ್ತದೆ 

 

 

ಎಲ್ಲಿ  ಸ್ಥಿರವಾಗಿ  ನಿಲ್ಲಬೇಕು   ?

>ದೃಷ್ಟ ಮತ್ತು ಅದೃಷ್ಟ (ಕಂಡು ಕಾಣದ )ಲಾಭದಿಂದ ಸಮೃದ್ಧವಾದ ನ್ಯಾಯಯುತವಾದ ಮಾರ್ಗ ದಲ್ಲಿ ಸದಾ  ಉಳಿಯಬೇಕು 

 

ದಾನವು ಯಾವುದು ?

 ಪ್ರತಿಯಾಗಿ ಏನನ್ನೂ ಬಯಸದೆ ಮಾಡಿದ ದಾನವೇ ನಿಜವಾದ ದಾನವು

 

(ನಿಜವಾದ) ಮಿತ್ರನು ಯಾರು ?

ಪಾಪ ಕಾರ್ಯಗಳನ್ನು ಮಾಡದಂತೆ ತಡೆಯುವನು ನಿಜವಾದ ಮಿತ್ರನು

 

ದುಃಖಕರವಾದುದು  ಯಾವುದು ?

ದಾರಿದ್ರ್ಯವು (ಬಡತನವು) ಕಷ್ಟಕರವಾದದ್ದು (ದುಃಖಕರವಾದದ್ದು)  

 

 ಎಂಥ ದೇಶದಿಂದ ದೂರ ಇರಬೇಕು ?

ಕ್ರೂರರಾದ ಪ್ರಜೆಗಳುಳ್ಳ  ಮತ್ತು ಲೋಭಿಯಾದ ರಾಜನುಳ್ಳ ದೇಶವನ್ನು ತೊರೆಯಬೇಕು 

  

ವಿಶ್ವದಲ್ಲಿ ಶೋಚನೀಯನು ಯಾರು ?

ಸಂಪತ್ತು ಇದ್ದರೂ ದಾನಿಯಾಗಿರದವನು ಶೋಚ್ಯನು  

 

ಹಗಲಿರುಳು (ಸದಾಕಾಲವೂ )ಯಾವುದನ್ನು ಕುರಿತು ಚಿಂತಿಸಬೇಕು ?

ಹಗಲಿರುಳು ಪರಮಾತ್ಮನ ಚರಣದ ಚಿಂತೆ ಮಾಡಬೇಕೇ ವಿನಃ ಸಂಸಾರವನ್ನಲ್ಲ

 

ಮಾನವರು ಏನನ್ನು ಸಂಪಾದಿಸಬೇಕು ?

ಮಾನವರು ವಿದ್ಯೆ ,ಸಂಪತ್ತು ,ಬಲ ,ಕೀರ್ತಿ ಮತ್ತು ಪುಣ್ಯಗಳನ್ನು ಸಂಪಾದಿಸಬೇಕು

 

ಎಲ್ಲ ಗುಣಗಳನ್ನು ನಾಶಪಡಿಸುವಂಥಹದು ಯಾವುದು ?

ಲೋಭವು ಸರ್ವ ಗುಣಗಳನ್ನು ನಾಶ ಪಡಿಸುವಂತಹದು  

 

ಎಲ್ಲ  ಗುಣಗಳನ್ನು ನಾಶಪಡಿಸುವಂಥಹುದು ಯಾವುದು ?

>ಲೋಭವು ಎಲ್ಲಾ  ಒಳ್ಳೆ ಗುಣಗಳನ್ನೂ ನಾಶಪಡಿಸುವಂತಹುದು  .

   

ವೈರಿಯು ಯಾರು ?

ಕಾಮವೇ ವೈರಿಯು .

೨೮


ಸಂರಕ್ಷಿ
ಸಲ್ಪಡತಕ್ಕಂಥಹದು ಯಾವುದು

>ಕೀರ್ತಿ ,ಪತಿವ್ರತೆ ಮತ್ತು ಸ್ವಂತ ಬುದ್ಧಿ (ಸ್ವಂತ ವಿಚಾರ ಶಕ್ತಿ ) ಇವು ಸಂ ರಕ್ಷಿಸಲು ಅರ್ಹ .

 

ಜಗತ್ತಿನ್ನಲ್ಲಿ ಕಲ್ಪಲತೆ ಯಾವುದು ?(ಬೇಡಿದ್ದನ್ನು ,ಬಯಸಿದ್ದನ್ನು ಕೊಡುವ ಬಳ್ಳಿ )

>ಒಳ್ಳೆಯ ಶಿಷ್ಯನಿಗೆ ಗುರುವು  ನೀಡಿದ ವಿದ್ಯೆಯು  ಜಗತ್ತಿನ್ನಲ್ಲಿ  ಕಲ್ಪಲತೆಯು .

 

ಪಾತಕವು ಯಾವುದು ?

>ಹಿಂಸೆಯೇ(ಕ್ರೂರತೆ)   ಪಾತಕವು.

  

ಒಳ್ಳೆಯವನಿಗೆ ಸಾವಿಗಿಂತಲೂ  ಹೆಚ್ಚು ದುಃಖದಾಯಕ  ಯಾವುದು ?

>ಅಪಕೀರ್ತಿಯು ಮರಣ ಕಿಂತಲೂ  ಹೆಚ್ಚು ದುಃಖದಾಯಕ.

 

ಯಾರು ಪ್ರಗತಿ ಯನ್ನು ಹೊಂದುತ್ತಾರೆ ?

>ವಿನಮ್ರ ನಾದವನು (ವಿನಯಶಾಲಿಯು ) ಪ್ರಗತಿಯನ್ನು  ಹೊಂದುತ್ತಾನೆ .

 

ದೇಹಿಗಳಿಗೆ (ಮನುಷ್ಯರಿಗೆ) ಭಾಗ್ಯವು ಯಾವುದು ?

>ಆರೋಗ್ಯವೇ ಭಾಗ್ಯವು .

 

ಎಲ್ಲರ ಬದುಕಿಗೆ ಕಾರಣನು ಯಾರು ?

>ಪರ್ಜನ್ಯನು (ಮಳೆ ) ಸಮಸ್ತ ಬದುಕಿಗೆ ಕಾರಣನು .

 

ಶೂರನು ಯಾರು ?

>  ಭೀತನಾದವನನ್ನು ಕಾಪಾಡುವವನು ಶೂರನು .

 

ಮತ್ತೆ  ಕಾಪಾಡುವವನು ಯಾರು ?

>ರಕ್ಷಿಸುವ ಗುರುವು .

   

ಪ್ರತ್ಯಕ್ಷ(ಸಾಕ್ಷಾತ್ )  ದೇವತೆ ಯಾರು ?

>ತಾಯಿಯೇ ಪ್ರತ್ಯಕ್ಷ ದೇವತೆಯು .

 

ಪೂಜ್ಯ ಗುರುವು ಯಾರು ?

ತಂದೆಯೇ ಪೂಜ್ಯ ಗುರುವು .

 

ಅನ್ನದಾನಕ್ಕೆ ಅರ್ಹನಾರು ?

>ಹಸಿದವನು ಅನ್ನದಾನಕ್ಕೆ ಅರ್ಹನು .